ಬೈಕ್‌ಗಳಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

Update: 2017-05-25 14:43 GMT

ಬಂಟ್ವಾಳ, ಮೇ 25: ಕಾರೊಂದು ಎರಡು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಹಿತ ಮೂವರು ಗಾಯಗೊಂಡಿರುವ ಘಟನೆ ಗಾನದಪಡ್ಪು ಕಾಂಜರಕೋಡಿ ಎಂಬಲ್ಲಿ ಗುರುವಾರ ಸಂಭವಿಸಿದೆ.

ತಾಲೂಕಿನ ಬೋಳಿಯಾರು ನಿವಾಸಿ ವಸಂತ, ಕಾರ್ಕಳ ನಿವಾಸಿ ಸಂದೇಶ ಗಾಯಗೊಂಡ ಬೈಕ್ ಸವಾರರು. ಈ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಿಂದ ಕಾರಿನಲ್ಲಿದ್ದ ಕಲ್ಲಟ್ಕದ ರಕ್ಷಾ ಎಂಬ ಬಾಲಕಿಯ ತುಟಿಗೆ ಗಾಯವಾಗಿದೆ.

ಕಲ್ಲಡ್ಕದ ಸದಾನಂದ ಎಂಬವರು ಕಲ್ಲಡ್ಕದಿಂದ ಬಂಟ್ವಾಳಕ್ಕೆ ತನ್ನ ರಿಡ್ಸ್ ಕಾರಿನಲ್ಲಿ ಸಂಚಾರಿಸುತ್ತಿದ್ದಾಗ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಎರಡು ಬೈಕ್‌ಗಳಿಗೆ ಢಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದ ಬೈಕ್ ಸವಾರರ ಕಾಲಿಗೆ ಗಾಯಗಳಾಗಿದೆ ಎಂದು ಬಂಟ್ವಾಳ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News