ಎಸ್ ವೈಎಸ್ ಹಾಗೂ ಎಸ್ಸೆಸ್ಸೆಫ್ ವಾಟ್ಸ್ಯಾಪ್ ಗ್ರೂಪಿನಿಂದ ಬಡ ಕುಟುಂಬಕ್ಕೆ ರಮಝಾನ್ ಕಿಟ್ ವಿತರಣೆ
Update: 2017-05-28 09:35 GMT
ಮಂಜೇಶ್ವರ, ಮೇ 28: ಎಸ್ ವೈಎಸ್, ಎಸ್ಸೆಸ್ಸೆಫ್ ವಾಟ್ಸ್ಯಾಪ್ ಗ್ರೂಪ್ ಹಾಗೂ ಎಸ್ ವೈ ಎಸ್ ಮೋಂಟುಗೋಳಿ ಬ್ರಾಂಚ್ ಇದರ ಅಶ್ರಯದಲ್ಲಿ ಮೋಂಟುಗೋಳಿಯಲ್ಲಿ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.
ಮೋಂಟುಗೋಳಿ ಶಾಖೆಯ ಅಧ್ಯಕ್ಷ ಮಂಜೇಶ್ವರ ಚಿಗುರುಪಾದೆಯ ಅಬ್ದುಲ್ ಖಾದರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಗೌಸಿಯ ಜುಮಾ ಮಸೀದಿ ಖತೀಬ್ ಅಬ್ದುಲ್ ಹಮೀದ್ ಸಖಾಫಿ, ಗೌಸಿಯ ಮಸೀದಿ ಅಧ್ಯಕ್ಷ ಎಂ.ಎಸ್. ಸುಲೈಮಾನ್, ಮುಹಮ್ಮದ್ ಹಾಜಿ, ಹಮೀದ್ ಪಟ್ಟೋರಿ, ಅಬೂಬಕ್ಕರ್ ಗರಡಿ, ನೌಫಲ್ ಮೋಂಟುಗೋಳಿ ಮೊದಲಾದವರು ಉಪಸ್ಥರಿದ್ದರು.
1200 ರೂ. ಮೌಲ್ಯದ ಸಾಮಗ್ರಿಗಳನ್ನೊಳಗೊಂಡ ರಮಝಾನ್ ಕಿಟ್ ನ್ನು 40 ಕುಟುಂಬಗಳಿಗೆ ಈ ಸಂದರ್ಭ ವಿತರಿಸಲಾಯಿತು. ಇದಕ್ಕೆ ಸಹಕಾರ ನೀಡಿದ ಹಸೈನಾರ್ ಕುವೈತ್ , ಇಲ್ಯಾಸ್ ಕುವೈತ್ ಹಾಗೂ ನೌಫಲ್ ಮೋಂಟುಗೋಳಿಯವರನ್ನು ಅಬಿನಂದಿಸಲಾಯಿತು.