ಕಾರಿಗೆ ಬೆಂಕಿ: ಮೂರು ಮಂದಿ ಸಜೀವ ದಹನ
Update: 2017-05-28 11:05 GMT
ಚೆನ್ನೈ, 28: ಓರ್ವ ಮಹಿಳೆಯ ಸಹಿತ ಮೂವರು ಕಾರಿನೊಳಗೆ ಸುಟ್ಟುಕರಕಲಾದ ದಾರುಣ ಘಟನೆ ಚೆನ್ನೈ ಮಹಾಬಲಿಪುರಂನ ಸಮೀಪ ನಡೆದಿದೆ. ರಸ್ತೆಯ ಬದಿ ಪಾರ್ಕ್ಮಾಡಿದ ಕಾರು ಕೆಲವೇ ನಿಮಿಷಗಳಲ್ಲಿ ಉರಿದು ಹೋಗಿತ್ತು. ಅದರೊಳಗಿದ್ದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. ಮಹಾಬಲಿಪುರದ ಮನಾಮ್ ಗ್ರಾಮ ಸಮೀಪದ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಘಟನೆ ನಡೆದಿದೆ. ಕಾರಿಗೆ ಬೆಂಕಿ ಹೇಗೆ ಹಿಡಿಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಪ್ರತ್ಯಕ್ಷದರ್ಶಿಗಳು ರಸ್ತೆಬದಿ ಕಾರು ಬಂದು ನಿಂತೊಡನೆ ಬೆಂಕಿ ಹೊತ್ತಿಕೊಂಡಿದೆ ಎಂದಿದ್ದಾರೆ. ಅಲ್ಲಿ ನೆರೆದ ಜನರು ಬೆಂಕಿಗೆ ಸಿಲುಕಿದ ಮೂವರನ್ನು ಕಾರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆತಂದಿದ್ದಾರೆ.ಆದರೆ ಅಷ್ಟರಲ್ಲೇ ಮೂವರೂ ಮೃತಪಟ್ಟಿದ್ದರು. ಘಟನೆನಿಗೂಢವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.