ಆದಿತ್ಯನಾಥ್ ಆಡಳಿತದಲ್ಲಿ ಪುರುಷರು ಮಹಿಳೆಯರನ್ನು ಮನೆಯೊಳಗೆ ಇರಿಸಬೇಕು: ಅಝಂ ಖಾನ್

Update: 2017-05-28 13:08 GMT

ಉತ್ತರ ಪ್ರದೇಶ, ಮೇ 28: ಇಬ್ಬರು ಯುವತಿಯರಿಗೆ ಹಾಡಹಗಲೇ ಯುವಕರ ಗುಂಪೊಂದು ಕಿರುಕುಳ ನೀಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಮಾಜಿ ಸಚಿವ ಅಝಂ ಖಾನ್, “ಆದಿತ್ಯನಾಥ್ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ನಂತರ ಪುರುಷರು ತಮ್ಮ ಮಹಿಳೆಯರನ್ನು ಮನೆಯೊಳಗೆ ಕೂರಿಸಬೇಕು” ಎಂಬಂತಾಗಿದೆ ಎಂದಿದ್ದಾರೆ,

ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಮಹಿಳೆಯರು ಅನುಮಾನಾಸ್ಪದ ಜಾಗಗಳಿಗೆ ತೆರಳಬಾರದು. ಲೂಟಿ ಹಾಗೂ ಕೊಲೆಯಂತಹ ಪ್ರಕರಣಗಳು ನಡೆಯುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಈ ಸರಕಾರದ ಆಡಳಿತದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಬುಲಂದ್ ಶಹರ್ ಘಟನೆಯ ನಂತರ ಪುರುಷರು ತಮ್ಮ ಮಹಿಳೆಯರನ್ನು ಮನೆಯೊಳಗೆ ಇಡಬೇಕು” ಎಂದವರು ಹೇಳಿದ್ದಾರೆ.

“ಆದಿತ್ಯನಾಥ್ ಸರಕಾರದ ನಿರ್ಲಕ್ಷ್ಯದಿಂದ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿದ್ದು, ನಾನು ಸರಕಾರವನ್ನು ಅಭಿನಂದಿಸುತ್ತೇನೆ” ಎಂದವರು ವ್ಯಂಗ್ಯವಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News