ಪ್ರಕಾಶ್ ಭಂಡಾರಿಗೆ ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ ಪ್ರದಾನ
Update: 2017-05-28 13:45 GMT
ಉಡುಪಿ, ಮೇ 28: ಬೆಂಗಳೂರು ಸುರ್ವೆ ಕಲ್ಚರಲ್ ಅಕಾಡೆಮಿ, ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಇದರ ಬೆಳ್ಳಿಹಬ್ಬದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ರಂಗ ಮಂದಿರದಲ್ಲಿ ನಡೆದ ಡಾ.ಶಿವರಾಂ ಕಾರಂತರ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ವಿಚಾರ ಸಂಕಿರಣದಲ್ಲಿ ಉಡುಪಿ ಕೊಳಲಗಿರಿಯ ಪ್ರಕಾಶ್ ಭಂಡಾರಿಯವರಿಗೆ ಸಾಮಾಜಿಕ ಕ್ಷೇತ್ರದ ಸಮಾಜ ಸೇವೆಗಾಗಿ ಕರ್ನಾಟಕ ವಿಕಾಸ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಚೆನ್ನಗಿರಿ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮಿ ಹಾಗೂ ಮಾಜಿ ಸಚಿವ ರಾಮಚಂದ್ರ ಗೌಡ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಉಪನ್ಯಾಸಕ ಡಾ.ಕೆ.ಪಿ ಪುತ್ತೂರಾಯ, ವಿದ್ಯಾವಾಚಸ್ಪತಿ ಕವಿತಾ ಕೃಷ್ಣ, ಚಲನ ಚಿತ್ರ ನಟಿ ಮೀನಾ, ಸಂಸ್ಥಾಪಕ ಅಧ್ಯಕ್ಷ ರಮೇಶ್ ಸುರ್ವೆ, ಕಾಂಗ್ರೆಸ್ ಮುಂಖಡ ಜಯಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು ಮೊದಲಾದವರು ಇದ್ದರು.