​ಇಂದ್ರಾಳಿ ಶಾಲೆ, ಬ್ಯಾಂಕಿಗೆ ನುಗ್ಗಿ ಕಳವಿಗೆ ಯತ್ನ

Update: 2017-05-28 13:46 GMT

ಉಡುಪಿ, ಮೇ 28: ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡದಲ್ಲಿ ರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ.

ಶಾಲೆಯ ಬೀಗವನ್ನು ಮುರಿದ ಒಳನುಗ್ಗಿದ ಕಳ್ಳರು, ಬ್ಯಾಂಕಿಗೆ ತಾಗಿಕೊಂಡಿರುವ ಶಾಲೆಯ ಶೌಚಾಲಯದ ಗೋಡೆಯನ್ನು ಕೊರೆದು ಅದರ ಮೂಲಕ ಬ್ಯಾಂಕಿನ ಒಳ ಪ್ರವೆಶಿಸಿದರು. ಬ್ಯಾಂಕಿನೊಳಗಿದ್ದ ಸೈರನ್ ವಯರನ್ನು ತುಂಡ ರಿಸಿ, ಸ್ಟ್ರಾಂಗ್ ರೂಮಿನ ಬೀಗವನ್ನು ಮುರಿದು, ಒಳಗಿದ್ದ ಅಲ್ಮೇರ ಹಾಗೂ ಸೇಫ್ ಲಾಕರನ್ನು ಆಯುಧದಿಂದ ಕೊಯ್ದು ತೆರಯಲು ಪ್ರಯತ್ನಿಸಿದ್ದಾರೆ.

ಅಲ್ಲದೆ ಬ್ಯಾಂಕಿಗೆ ತಾಗಿ ಕೊಂಡಿರುವ ಶಾಲೆಯ ಕಚೇರಿ ರೂಮಿನ ಬೀಗವನ್ನು ಮುರಿದ ಕಳ್ಳರು ಒಳಗಿರುವ ಕಪಾಟುಗಳನ್ನು ಜಾಲಾಡಿ ಕಳವಿಗೆ ಯತ್ನಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News