ಹೆಬ್ರಿ: ಚಿತ್ರಕಲಾ ತರಬೇತಿ ಉದ್ಘಾಟನೆ

Update: 2017-05-28 13:48 GMT

ಹೆಬ್ರಿ, ಮೇ 28: ಹೆಬ್ರಿ ಶ್ರೀರಾಮ್ ಟವರ್‌ನಲ್ಲಿರುವ ಚಾಣಕ್ಯ ಟ್ಯುಟೋರಿ ಯಲ್ ಕಾಲೇಜಿ ನಲ್ಲಿ ಆಯೋಜಿಸಲಾದ ಚಿತ್ರಕಲಾ ಶಿಬಿರವನ್ನು ಗಣಪತಿ ಚಿತ್ರ ಬಿಡಿಸುವುದರ ಮೂಲಕ ಶಿಬಿರಾರ್ಥಿ ಓಂಕಾರ್ ನಾಯಕ್ ರವಿವಾರ ಉದ್ಘಾಟಿಸಿದರು.

ತರಬೇತುದಾರ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕಲಾವಿದ ಪುನೀತ್‌ಕುಮಾರ್ ಎಸ್. ಮೈಸೂರು ವರ್ಲಿ ಆರ್ಟ್, ತಲೆಕೆಳಗಾಗಿ ಚಿತ್ರರಚನೆ, ಮಣ್ಣಿನ ಕಲಾಕೃತಿ, ಕಸದಿಂದ ರಸ ಮೊದಲಾದ ವಿವಿಧ ಬಗೆಯ ಚಿತ್ರ ರಚನೆ ಕುರಿತು ತರಬೇತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ರಮ್ಯ ಕಾಪೋಳಿ ಕಾರ್ಯಕ್ರವು ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News