ಮರದ ಗೆಲ್ಲು ಮೈಮೇಲೆ ಬಿದ್ದು ಮೃತ್ಯು

Update: 2017-05-28 16:09 GMT

ಬ್ರಹ್ಮಾವರ, ಮೇ 28: ಮರ ಕಡಿಯುತ್ತಿದ್ದ ವೇಳೆ ಮರದ ಗೆಲ್ಲು ಮೈಮೇಲೆ ಬಿದ್ದು  ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಕರ್ಜೆ ಕಡಂಗೋಡು ಎಂಬಲ್ಲಿ ನಡೆದಿದೆ.

ಮೃತರನ್ನು ಕರ್ಜೆ ಕಡಂಗೋಡುವಿನ ಸುಕ್ರ ನಾಯ್ಕ(60) ಎಂದು ಗುರುತಿಸಲಾಗಿದೆ. ಇವರು ಗದ್ದೆ ಕೃಷಿಗೆ ಸೊಪ್ಪು ಮಾಡಲೆಂದು ತಮ್ಮ ಜಾಗದಲ್ಲಿರುವ ಮರವೊಂದನ್ನು ಇತರ ಕೆಲಸಗಾರರೊಂದಿಗೆ ಕಡಿಯುತ್ತಿದ್ದರು. ಮರ ಬೀಳುವ ಹಂತಕ್ಕೆ ಬರುವಾಗ ಎಲ್ಲರು ದೂರ ಹೋಗಿ ನಿಂತಿದ್ದು, ಸುಕ್ರ ನಾಯ್ಕ ಓಡಿ ಬರುವಾಗ ಆಕಸ್ಮಿಕವಾಗಿ ಆಯ ತಪ್ಪಿಮರ ಬೀಳುವ ಕಡೆಗೆ ಬಿದ್ದರು. ಇದ ರಿಂದ ಮರದ ಗೆಲ್ಲು ತಲೆಗೆ ತಾಗಿ ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News