ಬಸ್ಸಿನಿಂದ ಬಿದ್ದು ಕೂಲಿಕಾರ್ಮಿಕ ಮೃತ್ಯು

Update: 2017-05-28 18:10 GMT

ಮೂಡುಬಿದಿರೆ, ಮೇ 28: ಬಸ್ ಕಂಡಕ್ಟರ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕ ಬಸ್ಸಿನಿಂದ ಬಿದ್ದು ಮೃತಪಟ್ಟ ಘಟನೆ ನಿಡ್ಡೋಡಿ ಸಮೀಪದ ಮಂಗೆಬೆಟ್ಟು ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ತೆಂಕಮಿಜಾರು ನಿವಾಸಿ ಸುರೇಶ್ ಗೌಡ (38)ಎಂದು ಗುರುತಿಸಲಾಗಿದೆ. ಸುರೇಶ್ ಎಂದಿನಂತೆ ಮಂಗಳೂರಿನಲ್ಲಿ ಕೂಲಿ ಕೆಲಸ ಮುಗಿಸಿ ಖಾಸಗಿ ಬಸ್ ನಲ್ಲಿ ಊರಿಗೆ ಹೊರಟಿದ್ದರು. ನಿಡ್ಡೋಡಿ ಮಂಗೆಬೆಟ್ಟು ಎಂಬಲ್ಲಿ ಅವರು ಬಸ್ಸಿನಿಂದ ಇಳಿಯಬೇಕೆನ್ನುವಷ್ಟರಲ್ಲಿ ಬಸ್ ಸೂಕ್ತ ಜಾಗದಲ್ಲಿ ನಿಲ್ಲದೆ ಇದ್ದಾಗ ಪ್ರಯಾಣಿಕ ಕಾಲು ಜಾರಿ ರಸ್ತೆಗೆ ಬಿದ್ದು ಗಾಯಗೊಂಡರೆನ್ನಲಾಗಿದೆ. ಕೂಡಲೆ ಕಿನ್ನಿಗೋಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಬಸ್ ಕಂಡಕ್ಟರ್ ಮತ್ತು ಚಾಲಕನ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿ ಅಪಘಾತಕ್ಕೆ ಕಾರಣ ಎಂದು ಮೂಡುಬಿದಿರೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸುರೇಶ್ ಗೌಡರಿಗೆ ಎಪ್ರಿಲ್‌ನಲ್ಲಿ ಪೆರ್ಮುದೆಯ ಯುವತಿಯೊಂದಿಗೆ ವಿವಾಹವಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News