ನುಗ್ಗೆ ಕಾಯಿ ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗಲಿ ವಿದ್ಯಾರ್ಥಿ ಮೃತ್ಯು

Update: 2017-05-29 12:27 GMT

ಕಾಸರಗೋಡು, ಮೇ 29:  ಕಬ್ಬಿಣದ ಸರಳಿನಿಂದ ನುಗ್ಗೆ ಕಾಯಿ ಕೊಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗಲಿ ವಿದ್ಯಾರ್ಥಿ ಮೃತಪಟ್ಟ ಘಟನೆ ಬೇಕಲ ಸಮೀಪದ ಪೆರಿಯಾಟಡ್ಕದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ತಮಿಳುನಾಡು ನಾಗರಕೋವಿಲ್ ನ   ಆರ್. ಜಿನಿತ್ ( 17) ಎಂದು ಗುರುತಿಸಲಾಗಿದೆ. ಈತ ನಾಗರಕೋವಿಲ್  ಕಾಲೇಜಿನ  12ನೇ ತರಗತಿ  ವಿದ್ಯಾರ್ಥಿಯಾಗಿದ್ದರು.

ರಜೆಯಲ್ಲಿ  ಬೇಕಲ ಪೆರಿಯಾಟಡ್ಕದಲ್ಲಿರುವ  ಚಿಕ್ಕಮ್ಮನ ಮನೆಗೆ ಬಂದಿದ್ದು,  ಮನೆ ಸಮೀಪದ ನುಗ್ಗೆ ಮರದಿಂದ ನುಗ್ಗೆ   ಕೊಯ್ಯು ತ್ತಿದ್ದಾಗ  ಮೇಲ್ಗಡೆ ಹಾದು ಹೋಗಿದ್ದ  ಎಚ್.ಟಿ.ಲೈನ್ ತಂತಿ ತಗಲಿ ಈ ಘಟನೆ ನಡೆದಿದೆ.

ಮೃತದೇಹವನ್ನು ಬೇಕಲ ಠಾಣಾ ಪೊಲೀಸರು ಮಹಜರು ನಡೆಸಿ,  ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ.
ಮರಣೋತ್ತರ  ಪರೀಕ್ಷೆ ನಡೆಸಿ ಊರಿಗೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News