ಅಡ್ಯಾರ್‌ನಲ್ಲಿ ಬಾಲಕರಿಬ್ಬರು ನೀರುಪಾಲು

Update: 2017-05-30 06:57 GMT

ಮಂಗಳೂರು, ಮೇ 30: ಈಜಲೆಂದು ನದಿಗಿಳಿದ ಬಾಲಕರಿಬ್ಬರು ನೀರುಪಾಲಾದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿ ನಿನ್ನೆ ಸಂಜೆ ನಡೆದಿದ್ದು, ಬಾಲಕರಿಬ್ಬರ ಮೃತದೇಹಗಳು ಇಂದು ಬೆಳಗ್ಗೆ ಪತ್ತೆಯಾಗಿವೆ.

ನೀರುಪಾಲಾದ ಬಾಲಕರನ್ನು ಪುದು ಗ್ರಾಮದ ರಾಮಣ್ಣ ಶೆಟ್ಟಿ ಎಂಬವರ ಪುತ್ರ ನಿಖಿತ್ ರಾಜ್(16) ಹಾಗೂ ಕುಂಪನಮಜಲು ನಿವಾಸಿ ಭವಾನಿಶಂಕರ್ ಎಂಬವರ ಪುತ್ರ ಯಜ್ಞೇಶ್(17) ಎಂದು ಗುರುತಿಸಲಾಗಿದೆ.

ಇವರಿಬ್ಬರು ಸೋಮವಾರ ಸಂಜೆ ಅಡ್ಯಾರ್‌ನಲ್ಲಿರುವ ಅರವಿಂದ್ ಮೋಟಾರ್ಸ್‌ ಶೋರೂಂ ಬಳಿ ನೇತ್ರಾವತಿ ನದಿಯಲ್ಲಿ ಈಜಲೆಂದು ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ. ತೀವ್ರ ಶೋಧ ಕಾರ್ಯ ನಡೆಸಿದರೂ ಇಬ್ಬರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.

ಆದರೆ ಇಂದು ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News