ಸಂತೋಷ್ ನಗರ: ಎಸ್ಸೆಸ್ಸೆಫ್ನಿಂದ ಉಚಿತ ಪುಸ್ತಕ ವಿತರಣೆ
Update: 2017-05-30 06:37 GMT
ಉಳ್ಳಾಲ, ಮೇ 30: ಎಸ್ಸೆಸ್ಸೆಫ್ ಸಂತೋಷ್ ನಗರ ಶಾಖೆಯ ವತಿಯಿಂದ ರಮಝಾನ್ ಪೂರ್ವ ತಯಾರಿ ಹಾಗೂ 50 ಬಡಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಸಂತೋಷ್ ನಗರದ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಸಂತೋಷ್ ನಗರ ಜುಮಾ ಮಸೀದಿಯ ಖತೀಬ್ ಯಾಕುಬ್ ನಈಮಿ ಅಲ್ ಅಫ್ಳಲಿ ರಮಝಾನ್ ಪೂರ್ವ ತಯಾರಿಯ ಬಗ್ಗೆ ವಿಷಯ ಮಂಡಿಸಿ ಮಾತನಾಡಿದರು.