ಈಜುಕೊಳದಲ್ಲಿ ಮುಳುಗಿ ಯುವ ಐಎಎಸ್ ಅಧಿಕಾರಿಯ ಸಾವು

Update: 2017-05-30 08:11 GMT

ಹೊಸದಿಲ್ಲಿ , ಮೇ 29: ಈಜು ಕೊಳದಲ್ಲಿ ಮುಳುಗುತ್ತಿದ್ದ   ತನ್ನ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ನೀರಿಗೆ ಧುಮುಕಿದ  ಐಎಎಸ್ ತರಬೇತಿ ನಿರತ ಅಧಿಕಾರಿಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ದಕ್ಷಿಣ ದಿಲ್ಲಿಯ ಬೇರ್‌ ಸರಾಯ್‌ ನಲ್ಲಿ ಸೋಮವಾರ ರಾತ್ರಿ ನಡೆದಿದೆ. 
30ರ ಹರೆಯದ ಆಶಿಶ್‌ ದಹಿಯಾ  ಮೃತಪಟ್ಟ ಅಧಿಕಾರಿ.

ಇವರು ಮೂಲತ: ಹರಿಯಾಣದ ಸೋನಿಪತ್‌ನವರು ಎಂದು ಪೊಲೀಸರು ತಿಳಿಸಿದ್ದಾರೆ. 2016 ಐಎಎಸ್ ಬ್ಯಾಚ್ ನ ಅಧಿಕಾರಿ ದಹಿಯಾ ಅವರುಈಜುಕೊಳ ಸಮೀಪದಲ್ಲಿ ಇಂಡಿಯನ್‌ ಫಾರೀನ್‌ ಮತ್ತು ರೆವೆನ್ಯೂ ಸರ್ವಿಸಸ್‌ನ ತನ್ನ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ  ಭಾಗವಹಿಸಿದ್ದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ  ಐಎಎಸ್‌ ತರಬೇತಿ ನಿರತ ಮಹಿಳಾ ಅಧಿಕಾರಿಯೊಬ್ಬರು ಕಾಲು ಜಾರಿ ಈಜು ಕೊಳಕ್ಕೆ ಬಿದ್ದಿದ್ದಾರೆ. ತಕ್ಷಣ ಆಶಿಶ್‌ ದಹಿಯಾ ಸೇರಿದಂತೆ ಅಲ್ಲಿದ್ದ ಸಹೋದ್ಯೋಗಿಗಳು ಮಹಿಳೆಯನ್ನು ನೀರಿನಿಂದ ಮೇಲೆತ್ತುವ ಪ್ರಯತ್ನ ನಡೆಸಿದ್ದಾರೆ. ಮಹಿಳಾ ಅಧಿಕಾರಿಯನ್ನು ನೀರಿನಿಂದ ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಇದೇ ವೇಳೆ ದಹಿಯಾ ನಾಪತ್ತೆಯಾಗಿದ್ದಾರೆ.  ಅವರ ಮೃತದೇಹ ತಡರಾತ್ರಿ ವೇಳೆ  ನೀರಿನಲ್ಲಿ ಪತ್ತೆಯಾಗಿದೆ 

ದಹಿಯಾ ಮದ್ಯ ಸೇವಿಸಿರುವ ಕಾರಣದಿಂದಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ   ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News