ಬಾಬರಿ ಮಸೀದಿ ಧ್ವಂಸ ಪ್ರಕರಣ; ಅಡ್ವಾಣಿ ಸೇರಿದಂತೆ 12 ಮಂದಿಗೆ ಜಾಮೀನು

Update: 2017-05-30 08:14 GMT

ಹೊಸದಿಲ್ಲಿ, ಮೇ 29: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾನಿ, ಕೇಂದ್ರ ಸಚಿವೆ ಉಮಭಾರತಿ, ಮಾಜಿ ಸಚಿವ ಮುರಳಿ ಮನೋಹರ್ ಜೋಶಿ ಸೇರಿದಂತೆ 12 ಮಂದಿ ಆರೋಪಿಗಳಿಗೆ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಅಡ್ವಾಣಿ ಸೇರಿದಂತೆ 12 ಮಂದಿ ಆರೋಪಿಗಳು ವಿಚಾರಣೆಗೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರಿಗೆ ಜಾಮೀನು  ಮಂಜೂರು ಮಾಡಿದ ನ್ಯಾಯಾಲಯವು 20 ಸಾವಿರ ರೂ.ಶ್ಯೂರಿಟಿ ನೀಡುವಂತೆ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News