ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷರಾಗಿ ಕೇರಳ ಬಿಜೆಪಿ ಮುಖಂಡ ಜಾರ್ಜ್ ಕುರಿಯನ್ ನೇಮಕ

Update: 2017-05-30 12:31 GMT

 ಹೊಸದಿಲ್ಲಿ, ಮೇ 30: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ(ಎನ್‌ಸಿಎಂ) ಉಪಾಧ್ಯಕ್ಷರಾಗಿ ಕೇರಳ ಬಿಜೆಪಿ ಮುಖಂಡ ಜಾರ್ಜ್ ಕುರಿಯನ್‌ರನ್ನು ನೇಮಿಸಲಾಗಿದೆ.

   ಕೇಂದ್ರದ ಅಲ್ಪಸಂಖ್ಯಾತರ ವ್ಯವಹಾರ ಇಲಾಖೆಯ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಈ ನೇಮಕ ಮಾಡಿದ್ದಾರೆ. ಕುರಿಯನ್ ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು ಮಹಾರಾಷ್ಟ್ರದ ಮಾಜಿ ಸಚಿವೆ ಸುಲೇಖಾ ಕುಂಭಾರೆ, ಗುಜರಾತ್‌ನ ಜೈನ ಸಮುದಾಯದ ಪ್ರತಿನಿಧಿ ಸುನಿಲ್ ಸಿಂಘಿ, ಪಾರ್ಸಿ ಸಮುದಾಯದ ಪ್ರತಿನಿಧಿ ವಡ ದಸ್ತುರ್ಜಿ ಖುರ್ಷಿದ್ ಕೈಕೊಬಾದ್ ದಸ್ತೂರ್ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಗೈರುಲ್ ಹಸನ್ ರಿಝ್ವಿ ಎನ್‌ಸಿಎಂನ ಅಧ್ಯಕ್ಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News