ದಕ್ಷಿಣ ವಲಯ ಕಾಂಗ್ರೆಸ್ನಿಂದ ಪುಸ್ತಕ ವಿತರಣೆ
Update: 2017-06-01 19:42 IST
ಮಂಗಳೂರು, ಜೂ.1: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಆರೂರು ಶ್ರೀಪತಿ ರಾವ್ ಫೌಂಡೇಶನ್ ಸಹಯೋಗದಲ್ಲಿ ಮಂಗಳಾದೇವಿಯ ದೇವಿ ನಿಲಯದಲ್ಲಿ ನಡೆಯಿತು.
ಶಾಸಕ ಜೆ.ಆರ್.ಲೋಬೊ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಆರೂರು ಶ್ರೀಪತಿ ರಾವ್ ಫೌಂಡೇಶನ್ ಮುಖ್ಯಸ್ಥ ಕಿಶೋರ್ ರಾವ್, ದಕ್ಷಿಣ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಅಮೀನ್, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್, ಕಾಂಗ್ರೆಸ್ ಸೇವಾದಳದ ಪ್ರಭಾಕರ್ ಶ್ರೀಯಾನ್, ಉಮೇಶ್ಚಂದ್ರ ಉಪಸ್ಥಿತರಿದ್ದರು