ಗೇಟಿಗೆ ಸಿಲುಕಿ ಜಿಂಕೆ ಸಾವು
Update: 2017-06-01 16:06 GMT
ಬೆಳ್ತಂಗಡಿ, ಜೂ. 1: ಬೆಳ್ತಂಗಡಿ ಅರಣ್ಯ ಇಲಾಖೆಯ ವ್ಯಾಪ್ತಿಯ ಬಂಗಾಡಿ ಸಮೀಪ ಬೆದ್ರಬೆಟ್ಟು ಎಂಬಲ್ಲಿ ಜಿಂಕೆಯೊಂದು ಕಬ್ಬಿಣದ ಗೇಟಿಗೆ ಸಿಲುಕಿ ಮೃತ ಪಟ್ಟಿದೆ.
ಬೆದ್ರಬೆಟ್ಟುವಿನಲ್ಲಿ ಖಾಸಗಿಯವರ ತೋಟದ ಆವರಣ ಗೇಟಿಗೆ ಕಾಡಿನಿಂದ ಬಂದ ಜಿಂಕೆಯೊಂದು ಗುರುವಾರ ಮಧ್ಯಾಹ್ನ ಸಿಲುಕಿಕೊಂಡಿತ್ತು. ಕುತ್ತಿಗೆ ಕಬ್ಬಿಣದ ಗೇಟಿಗೆ ಸಿಕ್ಕಿಕೊಂಡ ಕಾರಣ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.
ಸ್ಥಳೀಯರು ಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆಯವರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.