ಜೂ.7ಕ್ಕೆ ಆರ್‌ಟಿಒ ಸಭೆ

Update: 2017-06-02 14:47 GMT

ಉಡುಪಿ, ಜೂ.2: ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಜೂ.7 ರಂದು ಬೆಳಗ್ಗೆ 10:30ಕ್ಕೆ ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ. ಸಭೆಯಲ್ಲಿ ಸಾರಿಗೆ ಸೌಕರ್ಯದ ಕುರಿತು ಸಾರ್ವಜನಿಕರಿಂದ ಬರುವ ಕುಂದುಕೊರತೆ ಹಾಗೂ ಸಲಹೆಗಳನ್ನು ಆಲಿಸಲಾಗುವುದು.

11 ಕ್ಕೆ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್‌ನಲ್ಲಿ ಹಿಂದಿನ ಸಭೆಗಳಲ್ಲಿ ಮುಂದೂಡಿದ ವಿಷಯಗಳು, ನ್ಯಾಯಾಲಯದಿಂದ ಪರಿಗಣನೆಗೆ ಮರಳಿಸಿದ ವಿಷಯಗಳು, ತಡವಾಗಿ ನವೀಕರಣಕ್ಕೆ ಸಲ್ಲಿಸಿದ ಅರ್ಜಿಗಳು ಹಾಗೂ ಪರವಾನಿಗೆ ರದ್ಧತಿ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಇದರಲ್ಲಿ ಅರ್ಜಿದಾರರು ಮತ್ತು ಅವರ ಪ್ರತಿನಿಧಿಗಳು ಹಾಜರಿರುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News