ನಿವೃತ್ತ ಉಪ ತಹಶೀಲ್ದಾರರಿಗೆ ಬೀಳ್ಕೊಡುಗೆ

Update: 2017-06-03 16:41 GMT

ಕಾರ್ಕಳ, ಜೂ.3: ಕಳೆದ 37 ವರ್ಷಗಳಲ್ಲಿ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿ, ಕಂದಾಯ ನಿರೀಕ್ಷಕರಾಗಿ, ಉಪ ತಹಶೀಲ್ದಾರರಾಗಿ, ನಿಯೋಜನೆ ಮೇರೆಗೆ ಮೂಡುಬಿದಿರೆ ಮತ್ತು ಕಾರ್ಕಳ ವಿಧಾನಸಭಾ ಶಾಸಕರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿ ಬುಧವಾರ ನಿವೃತ್ತರಾದ ಉಪತಹಶೀಲ್ದಾರ ಕೆ.ಪಿ.ನಾಯ್ಕ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಕಂದಾಯ ಇಲಾಖೆ ನೌಕರರ ಸಂಘ, ಗ್ರಾಮಲೆಕ್ಕಾಧಿಕಾರಿಗಳ ಸಂಘ, ಗ್ರಾಮ ಸಹಾಯಕರ ಸಂಘ, ಮೋಜಣಿ ಶಾಖೆಯಿಂದ ಬೀಳ್ಕೊಡುಗೆ ನಡೆಯಿತು.

ಕ್ಷೇತ್ರ ತಹಶೀಲ್ದಾರ್ ಟಿ.ಜಿ.ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ನಿರೀಕ್ಷಕ ಸುರೇಶ್, ಪ್ರದಸ ಶಿವರಾಮ್, ದ್ವಿದಸ ಕಿಶೋರ್, ಗ್ರಾಮಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ, ನಿವೃತ್ತ ನೌಕರರಾದ ಅವಿಲ್ ಡಿಸೋಜ, ಸಾಣೂರು ಕೃಷ್ಣ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಕಾರ್ಯದರ್ಶಿ ಸುದರ್ಶನ್ ಸ್ವಾಗತಿಸಿದರು. ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಕರಣಿಕ ಪ್ರಶಾಂತ್ ಕುಮಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News