ಗಾಂಜಾ ಸೇವನೆ: ಮೂವರು ವಶಕ್ಕೆ

Update: 2017-06-07 16:57 GMT

ಮಂಗಳೂರು, ಜೂ. 7: ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಾಲಾಡಿ ಎಂ.ವಿ.ಶೆಟ್ಟಿ ಕಾಲೇಜು ಎದುರಿನ ರಸ್ತೆಯಲ್ಲಿ ಯುವಕರು ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಕಾವೂರು ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಪಂಜಿಮೊಗರು ಉರುಂದಾಡಿಗುಡ್ಡೆ ನಿವಾಸಿ ರೂಬಿನ್ ಕುರಿಯನ್ (26), ಶಾಂತಿನಗರದ ಗಣೇಶ್ ಪ್ರಭು (26) ಮತ್ತು ಕದ್ರಿಹಿಲ್ಸ್‌ನ ವಿಲಾಸ್ ನಾಯಕ್ (18) ಬಂಧಿತ ಆರೋಪಿಗಳು.

ಲೋಕೇಶ್ ಎಂಬಾತ ಪೊಲೀಸರು ಕಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಆರೋಪಿಗಳ ಪೈಕಿ ವಿಲಾಸ್ ನಾಯಕ್ ಎಂಬಾತ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದು, ಟ್ಯುಟೋರಿಯಲ್ ತರಗತಿಗಳಿಗೆ ಹೋಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News