ಬಾಸುಮಗೆ ಗೌರವ ಪ್ರಶಸ್ತಿ
Update: 2017-06-08 22:13 IST
ಉಡುಪಿ, ಜೂ.8: ಕರ್ನಾಟಕ ಬಾಲವಿಕಾಸ ಅಕಾಡೆಮಿ ನೀಡುವ 2016 -17ನೆ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಕಟಪಾಡಿ ವನಸುಮ ವೇದಿಕೆಯ ಸಂಚಾಲಕ, ರಂಗಕರ್ಮಿ ಬಾಸುಮ ಕೊಡಗು ಆಯ್ಕೆಯಾಗಿದ್ದಾರೆ.
ಜೂ.10ರಂದು ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿರುವರು. ಪ್ರಶಸ್ತಿಯು ನಗದು ಹಾಗೂ ಫಲಕವನ್ನೊಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.