ಭನ್ವಾರೀ ದೇವಿ ಬೆಂಗಳೂರಿನಲ್ಲಿ?: ಪ್ರಕರಣದಲ್ಲಿ ಹೊಸ ಟ್ವಿಸ್ಟ್

Update: 2017-06-10 16:18 GMT

ಜೋಧ್ ಪುರ, ಜೂ.10: ಐದೂವರೆ ವರ್ಷಗಳ ಹಿಂದೆ ಕೊಲೆಗೀಡಾದ ಭನ್ವಾರೀ ದೇವಿ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಭನ್ವಾರಿ ದೇವಿ ಕೊಲೆಯಾಗಿಲ್ಲ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ ಎಂದು ಕೊಲೆ ಪ್ರಕರಣದ ಆರೋಪಿ, ಇತ್ತೀಚೆಗಷ್ಟೇ ಬಂಧಿಸಲ್ಪಟ್ಟ ಇಂದಿರಾ ಬಿಷ್ಣೋಯಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾಳೆ.

ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಇಂದಿರಾ, ಸಿಬಿಐ ಸಂಗ್ರಹಿಸಿರುವ ಮೂಳೆಗಳು ಭನ್ವಾರೀ ದೇವಿಯದ್ದಲ್ಲ. ಈ ಬಗೆಗಿನ ಫೋರೆನ್ಸಿಕ್ ವರದಿ ಕೂಡ ನಿರ್ಣಾಯಕವಲ್ಲ ಎಂದಿದ್ದಾಳೆ.

“ಭನ್ವಾರಿ ಮೃತಪಟ್ಟಿದ್ದಾರೆ ಎನ್ನುವುದು ಸಿಬಿಐ ಹೇಳಿಕೆಯಾಗಿದೆ. ಆದರೆ ಅದೂ ಕೂಡ ಹೇಳಿಕೆಗಳು ಹಾಗೂ ಸಾಕ್ಷಿಗಳ ಆಧಾರದಲ್ಲಿದೆ. ಸಿಬಿಐ ಸಂಗ್ರಹಿಸಿದ್ದ ಮೂಳೆಗಳ ವರದಿ ಕೂಡ ಸರಿಯಾಗಿಲ್ಲ. ಇದರರ್ಥ ಭನ್ವಾರೀ ಜೀವಂತವಾಗಿರಬಹುದು” ಎಂದು ಇಂದಿರಾ ಪರ ವಕೀಲ ವಾದಿಸಿದರು. 

ಪ್ರಕರಣಕ್ಕೆ ಸಂಬಂಧಿಸಿ ಇಂದಿರಾ ಬಿಷ್ಣೋಯಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News