ಮಂಗಳೂರಿನಲ್ಲಿ ಹಲಸು ಹಬ್ಬ

Update: 2017-06-11 05:15 GMT

ಮಂಗಳೂರು, ಜೂ.11: ಸಾವಯವ ಕೃಷಿಕ ಗ್ರಾಹಕ ಬಳಗವು ನಗರದ ಬಾಳಂಭಟ್ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ದಿನದ ಹಲಸು ಹಬ್ಬಕ್ಕೆ ಇಂದು ಚಾಲನೆ ದೊರೆಯಿತು.

ಅಂತಾರಾಷ್ಟ್ರೀಯ ಹಲಸು ರಾಯಭಾರಿ ಶ್ರೀ ಪಡ್ರೆ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ವೇಳೆ ಡಾ.ಜಿ.ಕೆ.ವೀರೇಶ್ ಮತ್ತು ಅಡ್ಡೂರು ಕೃಷ್ಣ ರಾವ್ ಅವರ ‘ಕೃಷಿ ವಿಜ್ಞಾನ’ ಪುಸ್ತಕ ಲೋಕಾರ್ಪಣೆಗೊಂಡಿತು.
 ಮೇಳದಲ್ಲಿ ವಿವಿಧ ತಳಿಗಳ ಹಲಸುಗಳು, ಹಲಸಿನ ತಿನಿಸುಗಳಾದ ಹಪ್ಪಳ, ಮಾಂಬಳ, ಚಿಪ್ಸ್ ಇತ್ಯಾದಿಗಳ ಮಳಿಗೆಗಳಿವೆ. ಇದಲ್ಲದೆ ಹಲಸಿನ ವಿಶೇಷ ಊಟದ ವ್ಯವಸ್ಥೆಯೂ ಇದೆ.

ಮೇಳವು ಸಂಜೆ ಐದರ ತನಕ ಇರಲಿದೆ ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News