ಉಳ್ಳಾಲದಲ್ಲಿ ಬಿರುಸಿನ ಮಳೆ: ಮನೆಗಳಿಗೆ ಹಾನಿ

Update: 2017-06-11 16:48 GMT

ಉಳ್ಳಾಲ, ಜೂ. 11: ಕಳೆದ ಕೆಲವು ದಿನಗಳಿಂದ ಉಳ್ಳಾಲದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ರವಿವಾರ ಸುರಿದ ಮಳೆಗೆ ಪಿಲಾರ್ ಬಳಿ ಗುಡ್ಡ ಕುಸಿದು ಒಂದು ನಿರ್ಮಾಣ ಹಂತದ ಮನೆ ಸೇರಿದಂತೆ ಎರಡು ಮನೆಗಳಿಗೆ ಹಾನಿಯಾಗಿರುವ ಘಟನೆ ಸಂಭವಿಸಿದೆ.

ಪಿಲಾರ್ ಬಳಿ ಟಿ. ಇಬ್ರಾಹಿಂ ಎಂಬವರಿಗೆ ಸೇರಿದ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು, ಸುಮಾರು 4 ಲಕ್ಷ ರೂ. ಹೆಚ್ಚು ನಷ್ಟವಾಗಿದೆ. ಭಟ್ಕಳ ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ ಗುಡ್ಡದಲ್ಲಿ ಮಣ್ಣನ್ನು ಅವೈಜ್ಞಾನಿಕವಾಗಿ ಅಗೆದಿರುವುದರಿಂದ ಗುಡ್ಡ ಕುಸಿಯಲು ಕಾರಣವಾಗಿದ್ದು, ಮನೆಯ ಹಿಂಬದಿಗೆ ಹಾನಿಯಾಗಿದ್ದು, ಮನೆಯ ಅಡುಗೆ ಕೋಣೆ, ಬೆಡ್‌ರೂಂ ಹಾನಿಯಾಗಿ ಕಿಟಕಿ ಗಾಜುಗಳು ಪುಡಿಯಾಗಿವೆ. ಮನೆಯಲ್ಲಿ ಇಬ್ಬರೇ ಇದ್ದುದರಿಂದ ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News