ಕಲ್ಲಡ್ಕದಲ್ಲಿ ಶಾಂತಿಭಂಗಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಕಾರಣ: ಯು.ಟಿ. ಖಾದರ್

Update: 2017-06-13 16:02 GMT

ಮಂಗಳೂರು, ಜೂ.13: ಕಲ್ಲಡ್ಕದಲ್ಲಿ ಕೆಲವು ದಿನಗಳಿಂದ ಶಾಂತಿ ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ಆರೆಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕಾರಣ ಎಂದು ಆಹಾರ ಸಚಿವ ಯು.ಟಿ.ಖಾದರ್ ದೂರಿದ್ದಾರೆ. 

ಕೋಮು ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಹಾಗೂ ಕೋಮು ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ಕಲ್ಲಡ್ಕದಲ್ಲಿ ಪದೆಪದೇ ಶಾಂತಿ ಕದಡಲು ಪ್ರಭಾಕರ್ ಭಟ್ ಕಾರಣರಾಗುತ್ತಿದ್ದಾರೆ. ಇದರ ಆಧಾರದಲ್ಲೇ ಕಲ್ಲಡ್ಕದ ಅಹಿತಕರ ಘಟನೆಯ ತನಿಖೆಯನ್ನು ಪೊಲೀಸರು ನಡೆಸುವಂತೆ ರಾಜ್ಯ ಗೃಹ ಸಚಿವರಿಗೆ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ತಿಳಿಸಿರುವುದಾಗಿ ಖಾದರ್ ಹೇಳಿದ್ದಾರೆ.

ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಭಂಗವುಂಟು ಮಾಡದೆ ಸಾರ್ವಜನಿಕರು ಸಂಯಮದಿಂದ ವರ್ತಿಸಬೇಕು ಸಚಿವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News