ಜಿ.ಎನ್.ಎಂ. ಕಿರುಕುಳ: ಎಎನ್‌ಎಂ ಆತ್ಮಹತ್ಯೆಗೆ ಯತ್ನ

Update: 2017-06-13 16:36 GMT

ತುಮಕೂರು, ಜೂ.13: ಹಿರಿಯ ಆರೋಗ್ಯ ಸಹಾಯಕಿಯ ಕಿರುಕುಳದಿಂದ ಬೇಸತ್ತ ಕಿರಿಯ ಆರೋಗ್ಯ ಸಹಾಯಕಿಯೊಬ್ಬರು ಅವಧಿ ಮುಗಿದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾಗರತ್ನಬಾಯಿ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ.

ಹಿರಿಯ ಆರೋಗ್ಯ ಸಹಾಯಕಿ ಇಂದಿರಾ ಬಿ.ನಾಯಕ್ ಎಂಬುವರು, ಕಿರಿಯ ಆರೋಗ್ಯ ಸಹಾಯಕಿ ನಾಗರತ್ನಬಾಯಿ ರಿಗೆ ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ. ಇದರಿಂದ ಬೇಸತ್ತ ನಾಗರತ್ನಬಾಯಿ ಅವಧಿ ಮುಗಿದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇವರಿಬ್ಬರೂ ಸಹ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಇಂದಿರಾ ಬಿ.ನಾಯಕ್‌ರವರಿಗೆ ಬಡ್ತಿ ಸಿಕ್ಕಿದ್ದು, ಅಂದಿನಿಂದಲೂ ನಾಗರತ್ನಬಾಯಿ ಅವರಿಗೆ ಕಿರುಕುಳ ನೀಡುತ್ತಿದ್ದರೆನ್ನ ಲಾಗಿದೆ. ಇದರಿಂದ ಬೇಸತ್ತ ನಾಗರತ್ನಬಾಯಿ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಸಂಬಂಧ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News