×
Ad

ಹೊಳೆಗೆ ಬಿದ್ದು ಯುವಕ ಮೃತ್ಯು

Update: 2017-06-14 22:28 IST

ಮಂಗಳೂರು, ಜೂ. 14: ಯುವಕನೋರ್ವ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವ ಘಟನೆ ಅತ್ರಬೈಲು ಎಂಬಲ್ಲಿ ಬುಧವಾರ ನಡೆದಿದೆ.

ಮೃತರನ್ನು ಕುಂಜತ್ತಬೈಲು ನಿವಾಸಿ ಕಿಶೋರ್ ಸಾಲ್ಯಾನ್ (32) ಎಂದು ಗುರುತಿಸಲಾಗಿದೆ.

ಕಿಶೋರ್ ಬುಧವಾರ ಬೆಳಗ್ಗೆ 6 ಗಂಟೆಯಿಂದ 7ಗಂಟೆಯ ಮಧ್ಯೆ ಕುಂಬತ್‌ಬೈಲ್ ಮನೆಯಿಂದ ಕಾಲುದಾರಿಯಾಗಿ ಹೋಗುತ್ತಿದ್ದರು. ಅತ್ರಬೈಲು ಎಂಬಲ್ಲಿ ಹೊಳೆ ಬದಿಯಲ್ಲಿ ನೆರೆ ನೀರು ನಿಂತಿದ್ದು, ಈ ಸಂದರ್ಭದಲ್ಲಿ ಕಾಲು ಜಾರಿ ಹೊಳೆಗೆ ಬಿದ್ದು ನೀರು ಪಾಲಾಗಿದ್ದು, ಬಳಿಕ ಘಟನೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ದೊರಕಿದೆ. ಈ ಬಗ್ಗೆ ಅವರ ಸಹೋದರ ಸತೀಶ್ ಸಾಲ್ಯಾನ್ ಎಂಬವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News