×
Ad

ಕಾಸರಗೋಡು:ಕಾರ್ಮಿಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Update: 2017-06-17 22:03 IST

ಕಾಸರಗೋಡು,ಜೂ.17: ಕಾರ್ಮಿಕನೋರ್ವನ ಮೃತದೇಹ ವಾಸಸ್ಥಳದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ನಾಯಮ್ಮರ ಮೂಲೆಯಲ್ಲಿ ನಡೆದಿದೆ.

ತ್ರಿಶೂರು ವಡಕ್ಕಂಚೇರಿಯ  ಸಣ್ಣಿ ಥೋಮಸ್ ( 48) ಮೃತಪಟ್ಟವರು.
ಕಳೆದ  ಕೆಲ  ವರ್ಷಗಳಿಂದ ನಾಯಮ್ಮರ ಮೂಲೆಯಲ್ಲಿ  ವಾಸವಿದ್ದು , ಟೈಲ್ಸ್  ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ  ದುರ್ವಾಸನೆ ಕಂಡು ಬಂದುದರಿಂದ ಸಮೀಪದ  ಕ್ವಾಟರ್ಸ್ ನಲ್ಲಿದ್ದವರು  ಪೊಲೀಸರಿಗೆ ಮಾಹಿತಿ ನೀಡಿದರು.

ವಿದ್ಯಾನಗರ  ಠಾಣಾ ಪೊಲೀಸರು  ತಲುಪಿದ್ದು , ಒಳಗಿನಿಂದ ಬಾಗಿಲಿಗೆ ಬೀಗ ಜಡಿಯಲಾಗಿತ್ತು.  ಕೊನೆಗೆ  ಬಾಗಿಲು  ಮುರಿದು  ನೋಡಿದಾಗ  ಕೊಳೆತ ಸ್ಥಿತಿಯಲ್ಲಿ  ಪತ್ತೆಯಾಗಿದ್ದು , ನಾಲ್ಕೈದು ದಿನಗಳ ಹಿಂದೆಯೇ ಮೃತಪಟ್ಟಿರಬಹುದು  ಎಂದು ಶಂಕಿಸಲಾಗಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ,  ಕಾಸರಗೋಡು ಜನರಲ್  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News