ಉರ್ವಸ್ಟೋರ್: ಆಧಾರ್ ಕಾರ್ಡ್ ಉದ್ಘಾಟನೆ

Update: 2017-06-19 13:18 GMT

 ಮಂಗಳೂರು, ಜೂ.19: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ಉರ್ವಸ್ಟೋರ್‌ನ ಮಂಗಳೂರು ಡೊಮಿನಿಕ್ ಚರ್ಚ್ ಹಾಲ್‌ನಲ್ಲಿ ನಡೆದ ಆಧಾರ್ ಕಾರ್ಡ್ ನೋಂದಣಿಗೆ ಪ್ರಸೂತಿ ತಜ್ಞೆ ಡಾ. ಕವಿತಾ ಐವನ್ ಡಿಸೋಜ ಚಾಲನೆ ನೀಡಿದರು.

 ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ನಾಗವೇಣಿ, ಹರೀಶ್ ಶೆಟ್ಟಿ, ಡೊಮಿನಿಕ್ ಚರ್ಚ್‌ನ ಧರ್ಮಗುರು ಪ್ಲಾಡ್ ಕೋರ್ಡಾ, ಕೆಥೊಲಿಕ್ ವಲಯದ ಅಧ್ಯಕ್ಷ ಸ್ಟೀವನ್ ರೋಡ್ರಿಗಸ್, ಟ್ರಿಜಾ ಪಿಂಟೋ, ಚರ್ಚ್‌ನ ಉಪಾಧ್ಯಕ್ಷ ರಿಚರ್ಡ್ ಗೊಸ್ನಾಲಿಯಾ, ನಾಗೇಂದ್ರ ಕುಮಾರ್, ರೀನಾ ಪಿರೇರಾ ಉಪಸ್ಥಿತರಿದ್ದರು.

ಅಶೋಕ್ ನಗರ ಘಟಕ ಅಧ್ಯಕ್ಷ ನೊರಿನ್ ಪಿಂಟೊ ಸ್ವಾಗತಿಸಿದರು. ರೋನಾಲ್ಡ್ ಕೊಲಾಸೊ ಕಾರ್ಯಕ್ರಮ ನಿರೂಪಿಸಿದರು, ಬೆನೆಡಿಕ್ಟಾ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News