ಅಶ್ರಫ್ ಕಲಾಯಿ ಹತ್ಯೆ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ: ಎಮ್.ಎಸ್.ಎಫ್ ಒತ್ತಾಯ

Update: 2017-06-21 10:36 GMT

ಮಂಗಳೂರು, ಜೂ.21: ಬಾಡಿಗೆಯ ನೆಪದಲ್ಲಿ ಕರೆದುಕೊಂಡು ಹೋಗಿ ಬೆಂಜನಪದವಿನಲ್ಲಿ ಬರ್ಬರವಾಗಿ ಕೊಚ್ಚಿ ಹಾಕಿದ ಆರೋಪಿಗಳನ್ನು ಶೀಘ್ರದಲ್ಲೆ ಬಂಧಿಸಬೇಕು. ಕೆಲವು ದಿನಗಳಲ್ಲಿ ಬುದ್ಧಿವಂತರ ಜಿಲ್ಲೆಯಲ್ಲಿ ಭಯಭೀತರಾಗಿ ಜೀವಿಸುವ ಗತಿಗೇಡು ಬಂದಿದೆ ಇದಕ್ಕೆ ಸರಕಾರ ಮತ್ತು ಜಿಲ್ಲಾಡಳಿತವೇ ನೇರ ಹೊಣೆ.

ರಿಕ್ಷಾ ಡ್ರೈವರ್ ಗಳಿಗೆ ಇಲ್ಲಿ ರಕ್ಷಣೆಯು ಇಲ್ಲದಂತಾಗಿದೆ , ಜಿಲ್ಲಾಡಳಿತವೂ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂದು ಎಮ್.ಎಸ್.ಎಫ್ ಜಿಲ್ಲಾ ಸಮಿತಿಯು ಜಿಲ್ಲಾಡಳಿತವನ್ನು ಒತ್ತಾಯಿಸುತ್ತದೆ. ಅಲ್ಲದೆ ಶಾಂತಿಪ್ರಿಯರು ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ವಿನಂತಿಸಿಕೊಳ್ಳುತಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News