ಎಟಿಎಂ ನಂಬರ್ ಪಡೆದು ಹಣ ವಂಚನೆ

Update: 2017-06-21 15:59 GMT

ಕಾರ್ಕಳ, ಜೂ.21: ಕರೆ ಮಾಡಿ ಎಟಿಎಂ ನಂಬರ್ ಪಡೆದು ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಪೊರೇಷನ್ ಬ್ಯಾಂಕ್ ಕಾರ್ಕಳ ಶಾಖೆಯ ಖಾತೆದಾರರಾದ ಹಿರ್ಗಾನ ಗ್ರಾಮದ ಮೂರೂರು ನಿವಾಸಿ ಲೋಕೇಶ್ ಶೆಟ್ಟಿ(39) ಎಂಬವರಿಗೆ ಜೂ.19 ರಂದು ವ್ಯಕ್ತಿಯೊಬ್ಬರು ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತ, ನಾನು ಹೈದರಾಬಾದ್ ಕಾರ್ಪೊರೇಷನ್ ಬ್ಯಾಂಕಿನಿಂದ ನಿಮ್ಮ ಅಕೌಂಟ್ ನಂಬರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ನಿಮ್ಮ ಎಟಿಎಂ ಕಾರ್ಡ್ ನಂಬರ್ ಬೇಕು, ಇಲ್ಲದಿದ್ದಲ್ಲಿ ನಿಮ್ಮ ಅಕೌಂಟನ್ನು ಮುಕ್ತಾಯಗೊಳಿಸುತ್ತೇನೆ ಎಂದು ಹೇಳಿದ. ಆಗ ನಾನು ಎಟಿಎಂ ಕಾರ್ಡ್ ನಂಬರ್ ನೀಡಿದ್ದು, ತಕ್ಷಣವೇ ಲೋಕೇಶ್ ಅಕೌಂಟ್‌ನಿಂದ ಒಟ್ಟು 34,995ರೂ. ಹಣ ಡ್ರಾ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News