ಕಳಪೆ ಗುಣಮಟ್ಟ ಪತಂಜಲಿಯ ಆರು ಉತ್ಪನ್ನಗಳನ್ನು ಹಿಂಪಡೆಯಲು ನೇಪಾಳ ಸೂಚನೆ

Update: 2017-06-21 18:05 GMT

ಹೊಸದಿಲ್ಲಿ, ಜೂ.21: ಕಳಪೆ ಗುಣಮಟ್ಟದ ಕಾರಣ ತನ್ನ ಆರು ಆಯುರ್ವೇದಿಕ್ ಉತ್ಪನ್ನಗಳನ್ನು ಹಿಂಪಡೆಯುವಂತೆ ಪತಂಜಲಿ ಆಯುರ್ವೇದ ಸಂಸ್ಥೆಗೆ ನೇಪಾಳದ ಅಧಿಕಾರಿಗಳು ಸೂಚಿಸಿದ್ದಾರೆ.

ಪತಂಜಲಿ ಸಂಸ್ಥೆಯ ಆಮ್ಲ ಚೂರ್ಣ, ದಿವ್ಯ ಗಷರ್ ಚೂರ್ಣ, ಬಹುಚಿ ಚೂರ್ಣ, ತ್ರಿಫಲ ಚೂರ್ಣ, ಅಶ್ವಗಂಧ, ಅದಿವ್ಯ ಚೂರ್ಣ- ಈ ಉತ್ಪನ್ನಗಳ ಗುಣಮಟ್ಟ ಕಳಪೆ ಎಂದು ವಿವಿಧ ಪ್ರಯೋಗಾಲಯಗಳಲ್ಲಿ ನಡೆಸಿದ ಪ್ರಯೋಗದಿಂದ ದೃಢಪಟ್ಟಿದೆ. ಆದ್ದರಿಂದ ಇವನ್ನು ಹಿಂಪಡೆಯುವಂತೆ ನೇಪಾಳ ಸರಕಾರ ಸಾರ್ವಜನಿಕ ನೋಟಿಸ್ ಮೂಲಕ ಪತಂಜಲಿ ಸಂಸ್ಥೆಯ ಸಹಸಂಸ್ಥೆ , ಉತ್ತರಾಖಂಡದ ದಿವ್ಯ ಫಾರ್ಮಸಿ ಸಂಸ್ಥೆ ಗೆ ಸೂಚಿಸಿದೆ.

ಪತಂಜಲಿ ಉತ್ಪನ್ನಗಳು ನೇಪಾಲದಲ್ಲಿ ಸಾಕಷ್ಟು ಜನಪ್ರಿಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News