ಮಧ್ಯಪ್ರದೇಶದಲ್ಲಿ ರೈತನ ಆತ್ಮಹತ್ಯೆ

Update: 2017-06-23 12:22 GMT

ಭೋಪಾಲ,ಜೂ.23: ಛತ್ತರ್‌ಪುರ ಜಿಲ್ಲೆಯ ಪಾಲಿ ಗ್ರಾಮದಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಘುವೀರ ಯಾದವ(27) ಜೂ.21ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ದಿ.22ರಂದು ಸಂಜೆ ಚಿಕಿತ್ಸೆಗಾಗಿ ಗ್ವಾಲಿಯರ್‌ನ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಕೊನೆಯುಸಿ ರೆಳೆದಿದ್ದಾನೆ.

ಸಾಲದ ಬಾಧೆ ಯಾದವ್ ಆತ್ಮಹತ್ಯೆಗೆ ಕಾರಣವೆಂದು ಆತನ ಕುಟುಂಬ ಹೇಳಿದ್ದರೆ, ಆಸ್ತಿಪಾಲಿಗೆ ಸಂಬಂಧಿಸಿದ ಕೌಟುಂಬಿಕ ವಿವಾದದಿಂದ ಆತ ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಸಾಲ ಮನ್ನಾ ಮತ್ತು ಬೆಳೆಗಳಿಗೆ ಉತ್ತಮ ಬೆಲೆಯ ಬೇಡಿಕೆಯೊಂದಿಗೆ ರೈತರ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಸಾಲದ ಬಾಧೆಯಿಂದ 21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News