ಅಶಾಂತಿ ಸೃಷ್ಠಿಸುವ ಯತ್ನ ಆರೋಪ: ಪುತ್ತಿಲ ಬಂಧನಕ್ಕೆ ಎಸ್‌ಡಿಪಿಐ ಆಗ್ರಹ

Update: 2017-06-23 15:13 GMT

ಪುತ್ತೂರು, ಜೂ.23; ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದೀಚೆಗೆ ನಿರಂತರವಾಗಿ ಕೋಮುಗಲಭೆ ಸೃಷ್ಠಿಸುವ ಪ್ರಯತ್ನದ ಮೂಲಕ ಸಂಘ ಪರಿವಾರ ಅಶಾಂತಿಯ ವಾತಾವರಣ ನಿರ್ಮಿಸುತ್ತಿದೆ. ಈ ಬಗ್ಗೆ ಜಿಲ್ಲೆಯ ಪ್ರಜ್ಞಾವಂತ ಜನತೆ ತಲೆಗೆಡಿಸಿಕೊಳ್ಳದೆ ಶಾಂತಿ ಮತ್ತು ಸಾಮರಸ್ಯದ ಬದುಕಿಗೆ ಬಯಸುತ್ತಿರುವಾಗಲೇ ಸುದ್ದಿಗೋಷ್ಠಿ ನಡೆಸಿ ಕಾನೂನು ಹಾಗು ಪೊಲೀಸ್ ಇಲಾಖೆಗೆ ಸವಾಲು ಹಾಕುವ ಮೂಲಕ ಅಶಾಂತಿಗೆ ಕಾರಣವಾಗಿರುವ ಸಂಘ ಪರಿವಾರದ ಮುಖಂಡ ಅರುಣ್‌ಕುಮಾರ್ ಪುತ್ತಿಲ ಅವರನ್ನು ಮುಂಜಾಗೃತಾ ಕ್ರಮವಾಗಿ ಕೂಡಲೇ ಬಂಧಿಸಬೇಕೆಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಜಾಬಿರ್ ಅರಿಯಡ್ಕ ಅವರು ಆಗ್ರಹಿಸಿದ್ದಾರೆ.

ಕೋಮುಗಲಭೆ ಸೃಷ್ಠಿಸಿಯೇ ಸಿದ್ದ ಎಂಬ ರೀತಿಯಲ್ಲಿ ಸಂಘ ಪರಿವಾರದವರು ದ್ವೇಷ ಹರಡುವ ಪ್ರಯತ್ನ ನಡೆಸುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಪುತ್ತೂರಿನ ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಸುದ್ದಿಗೋಷ್ಠಿ ನಡೆಸಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News