ಪೊಲೀಸ್ ಕಾನ್ಸ್ಟೇಬಲ್ ನಾಪತ್ತೆ

Update: 2017-06-23 15:37 GMT

ಮಂಜೇಶ್ವರ, ಜೂ. 23: ಪೊಲೀಸ್ ಕಾನ್‌ಸ್ಟೇಬಲ್ ನಾಪತ್ತೆಯಾದ ಬಗ್ಗೆ ದೂರಲಾಗಿದೆ.

ಹೊಸಂಗಡಿ ಬಳಿಯ ಅಂಗಡಿಪದವು ಶಾಂತಿನಗರ ನಿವಾಸಿ ದಿ. ಚೌಕಾರು ಎಂಬವರ ಪುತ್ರ ಮೋಹನ್ ಕುಮಾರ್(35) ನಾಪತ್ತೆಯಾದ ವ್ಯಕ್ತಿ. ಇವರು ಮಂಗಳೂರು ಸಿಟಿ ಆರ್ಮ್ಡ್ ರಿಸರ್ವ್ ಫೋರ್ಸ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಹೆಡ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದಿನನಿತ್ಯ ಮನೆಗೆ ಬಂದು ಮರಳುತ್ತಿದ್ದ ಮೋಹನ್ ಕುಮಾರ್ ಜೂ.5ರಂದು ಬೆಳಗ್ಗೆ ಹೋದವರು ಇದುವರೆಗೆ ಮರಳಿ ಬಂದಿಲ್ಲವೆಂದು ದೂರಲಾಗಿದೆ.

ಈ ಬಗ್ಗೆ ಉದ್ಯೋಗ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ವಿಚಾರಿಸಿದಾಗ ಮಾರ್ಚ್ 1ರಿಂದಲೇ ಮೋಹನ್ ಕುಮಾರ್ ಕೆಲಸಕ್ಕೆ ಹಾಜರಾಗಿಲ್ಲವೆಂದು ತಿಳಿಸಿರುವುದಾಗಿ ಮನೆಯವರು ಹೇಳುತ್ತಿದ್ದಾರೆ. ನಾಪತ್ತೆ ಬಗ್ಗೆ ಮೋಹನ್ ಕುಮಾರ್‌ರ ತಾಯಿಯ ಸಹೋದರ ಬಿ.ಎಂ. ಸುಂದರ ಎಂಬವರು ಮಂಜೇಶ್ವರ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News