ಮೂಡುಬಿದಿರೆ: ರಿಫಾಯಿ ಯಂಗ್ ಮೆನ್ಸ್ ವತಿಯಿಂದ ಇಪ್ತಾರ್ ಕೂಟ
Update: 2017-06-23 16:06 GMT
ಮೂಡುಬಿದಿರೆ, ಜೂ. 23: ರಿಫಾಯಿ ಯಂಗ್ ಮೆನ್ಸ್ ಕಮಿಟಿ ಪುತ್ತಿಗೆ ಪದವು ಇದರ ವತಿಯಿಂದ ಇಪ್ತಾರ್ ಕಾರ್ಯಕ್ರಮವು ಪುತ್ತಿಗೆ ಮಸೀದಿಯಲ್ಲಿ ನಡೆಯಿತು
ರಿಫಾಯಿ ಯಂಗ್ ಮೆನ್ಸ್ ಕಮಿಟಿಯ ಆಡಳಿತಾಧಿಕಾರಿಗಳು ಮತ್ತು ಸರ್ವ ಸದಸ್ಯರು ಮತ್ತು ಊರಿನ ಹಿರಿಯ ವ್ಯಕ್ತಿಗಳು ಹಾಗೂ ಉಸ್ತಾದರು ಇಫ್ತಾರ್ ಕೂಟದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಮಿಟಿ ವತಿಯಿಂದ ಎರಡು ಕಪಾಟುಗಳನ್ನು ಮಸೀದಿಯ ಗುರುಗಳಿಗೆ ಹಸ್ತಂತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ವಸೀರ್ ಪುತ್ತಿಗೆ, ಉಪಾಧ್ಯಕ್ಷ ಜಹಾಂಗೀರ್ ಪುತ್ತಿಗೆ, ಕಾರ್ಯದರ್ಶಿ ಸರ್ಫ್ರರಾಝ್ ಪುತ್ತಿಗೆ ಮತ್ತು ಆಸೀಫ್ ಪುತ್ತಿಗೆ, ಜೊತೆ ಕಾರ್ಯದರ್ಶಿ ಇಮ್ರಾನ್ ಪುತ್ತಿಗೆ, ನಬೀಲ್ ಪುತ್ತಿಗೆ, ಮಜೀದ್ ಪುತ್ತಿಗೆ ಉಪಸ್ಥಿತರಿದ್ದರು. ಗಲ್ಫ್ ಪ್ರವಾಸಿಗರು ಈ ಕಾರ್ಯಕ್ರಕ್ಕೆ ಶುಭಹಾರೈಸಿದರು