ಬಾಲಕನ ನಾಪತ್ತೆ

Update: 2017-06-23 16:19 GMT

ಉಡುಪಿ, ಜೂ.23: ಕುಂದಾಪುರ ತಾಲೂಕಿನ ಬೇಳೂರು ಸ್ಪೂರ್ತಿಧಾಮದ ಪುನರ್ವಸತಿಯಲ್ಲಿದ್ದ 16 ವರ್ಷ ಪ್ರಾಯದ ವಿಠಲ ಎಂಬ ಬಾಲಕ ಕೆದೂರು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಮರು ಪರೀಕ್ಷೆ ಕಟ್ಟಿ ತಯಾರಿ ನಡೆಸುತ್ತಿದ್ದವನು ಪರೀಕ್ಷೆ ಬರೆಯಲು ಇಷ್ಟವಿಲ್ಲದೆ ಜೂ.10ರಂದು ಬೆಳಗ್ಗೆ 10:30ಕ್ಕೆ ಸ್ಪೂರ್ತಿಧಾಮದಿಂದ ತಪ್ಪಿಸಿಕೊಂಡಿದ್ದಾರೆ.
 ಕಾಣೆಯಾದ ಬಾಲಕನ ಪತ್ತೆಗಾಗಿ ಪರಿಸರದಲ್ಲಿ ಹುಡುಕಾಡಿದಾಗ ಪತ್ತೆಯಾಗದೇ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಾಲಕ ಪತ್ತೆಯಾದಲ್ಲಿ ಕೋಟ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News