ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತ್ರ್
Update: 2017-06-25 16:08 IST
ಕುಂದಾಪುರ, ಜೂ.25: ಪವಿತ್ರ ರಮ್ಝಾನ್ ಮಾಸದ ಉಪವಾಸ ಆಚರಣೆಯ ನಂತರದ ಈದುಲ್ ಫಿತ್ರ್ ಹಬ್ಬವನ್ನು ಕುಂದಾಪುರದಲ್ಲಿ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.
“ಸ್ಥಳೀಯ ಜಾಮಿಯಾ ಮಸೀದಿಯಲ್ಲಿ ಬೆಳಗ್ಗೆ 8:30ಕ್ಕೆ ಈದ್ ನಮಾರ್ ನೆರವೇರಿಸಿದ ಧರ್ಮಗುರುಗಳಾದ ಮೌಲಾನ ಹಾಜಿ ಅಬ್ದುಲ್ ರಹೀಮ್ ಪವಿತ್ರ ರಮ್ಜಾನ್ ಬಗ್ಗೆ ಪ್ರವಚನ ನೀಡಿ ಇಸ್ಲಾಮ್ ತತ್ವಗಳಾದ ಶಾಂತಿ, ಸಹೋದರತೆ, ಸಹನೆಯ ಹಾದಿಯಲ್ಲಿಯೇ ಮುಂದುವರಿಯುವ ಹಾಗೂ ದೀನ ದಲಿತರ, ಬಡವರ, ಅಸಹಾಯಕರ ಹಸಿವಿನ ಸಂಕಟ, ನೋವನ್ನು ಸ್ವತ:, ನಮ್ಮ ಅನಭವಕ್ಕೆ ತರುವ ಪವಿತ್ರ ರಮ್ಜಾನ್ ಮಾಸದ ಪಾವಿತ್ಯ್ರತೆ ಮತ್ತು ದಾನ ಧರ್ಮದ ಬಗ್ಗೆ ಹೇಳಿದರು.
ನಮಾಜ್ ನಂತರ ನಗರದ ಪ್ರಮುಖ ಮಾರ್ಗದ ಮೂಲಕ ಸ್ವಲಾತ್ ಹೇಳುತ್ತಾ ಈದ್ಗಾಗೆ ಸಾಗಿದ ಮುಸ್ಲಿಮರು ದುವಾ ನೆರವೇರಿಸಿ ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯಿಸಿಕೊಂಡರು.