ಕಾಸರಗೋಡು: ಸ್ವಚ್ಛತಾ ಅಭಿಯಾನ

Update: 2017-06-27 07:25 GMT

ಕಾಸರಗೋಡು, ಜೂ. 27: ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ  ಕೇರಳದಲ್ಲಿ ಸ್ವಚ್ಛತಾ ಅಭಿಯಾನಕ್ಕೆ  ಮುಂದಾಗಿದ್ದು, ಸರಕಾರದ  ವಿವಿಧ ಇಲಾಖೆ, ಸಂಘ ಸಂಸ್ಥೆ, ಸ್ಥಳೀಯಾಡಳಿತ ಸಂಸ್ಥೆ  ಮೊದಲಾದವುಗಳ  ಸಹಯೋಗದೊಂದಿಗೆ ಶುಚೀಕರಣ ನಡೆಯುತ್ತಿವೆ.

ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆ  ಪರಿಸರದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸ್ವಚ್ಛತಾ ಅಭಿಯಾನಕ್ಕೆ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಚಾಲನೆ ನೀಡಿದರು.
ಶಾಸಕ ಎನ್.ಎ. ನೆಲ್ಲಿಕುನ್ನು, ನಗರಸಭಾ ಅಧ್ಯಕ್ಷೆ  ಬೀಫಾತಿಮ್ಮ ಇಬ್ರಾಹಿಂ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕು೦ಞಿ ಮೊದಲಾದವರು  ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News