ಮಹಾರಾಷ್ಟ್ರ ರೈತರ ಮುಷ್ಕರ: ಇನ್ನಿಬ್ಬರು ಗ್ರಾಮಸ್ಥರ ಬಂಧನ

Update: 2017-06-27 12:25 GMT

ಮುಂಬೈ,ಜೂ.27: ಮಹಾರಾಷ್ಟ್ರದಲ್ಲಿ ರೈತರ ಮುಷ್ಕರಕ್ಕೆ ಸಂಬಂಧಿಸಿದಂತೆ ಕಲ್ಯಾಣ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಇನ್ನಿಬ್ಬರು ಗ್ರಾಮಸ್ಥರನ್ನು ಪೊಲೀಸರು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಕಲ್ಲುತೂರಾಟ ಮತ್ತು ಪೊಲೀಸರೊಂದಿಗೆ ಜಟಾಪಟಿ ನಡೆಸಿದ್ದ ಇನ್ನಿಬ್ಬರನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಇರುವಿಕೆಯ ಕುರಿತು ಮಾಹಿತಿಯನ್ನು ಅವರ ಕುಟುಂಬಗಳು ನೀಡುತ್ತಿಲ್ಲ, ಆದರೆ ಅವರು ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದಾರೆಂದು ನಾವು ಶಂಕಿಸಿದ್ದೇವೆ ಎಂದು ಥಾಣೆ ಕ್ರೈಂ ಬ್ರಾಂಚ್‌ನ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ತನಿಖೆಯಲ್ಲಿ ತಮ್ಮ ನೆರವಿಗಾಗಿ ಪೊಲಿಸರು ಸೋಮವಾರ ಡ್ರೋನ್ ನಿಯೋಜಿಸಿದ್ದು,ಇದರಿಂದಾಗಿ 10 ಜನರನ್ನು ಬಂಧಿಸಲು ಸಾಧ್ಯವಾಗಿತ್ತು. ಬಂಧಿತರ ಸಂಖ್ಯೆ ಈಗ ಒಟ್ಟು 32ಕ್ಕೇರಿದೆ. ಆದರೆ ಸಂಜೆಯ ವೇಳೆಗೆ ಡ್ರೋನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅದು ಕೆಳಕ್ಕೆ ಬಿದ್ದು ಹಾನಿಗೀಡಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News