×
Ad

ಹಲ್ಲೆ, ದರೋಡೆ: ಮೂವರು ಪೊಲೀಸ್ ವಶಕ್ಕೆ

Update: 2017-06-27 22:22 IST

ಮಂಗಳೂರು, ಜೂ. 27: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಲಿನ ಡೈರಿಗೆ ನುಗ್ಗಿ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಮರ್ ಫಾರೂಕ್ ಇರ್ಫಾನ್ (21), ಸೈಫುದ್ದೀನ್ (23) ಮತ್ತು ಅಝರುದ್ದೀನ್ ಯಾನೆ ಅಝರ್ (23) ಎಂದು ಗುರುತಿಸಲಾಗಿದೆ.

ಸುರತ್ಕಲ್ ಸಮೀಪದ ಹಾಲಿನ ಡೈರಿಗೆ ನುಗ್ಗಿದ್ದ ನಾಲ್ವರು ಆರೋಪಿಗಳು ಅಲ್ಲಿನ ಸಿಬ್ಬಂದಿಗೆ ಹಲ್ಲೆ ನಡೆಸಿ ಹಣ ದೋಚಿದ್ದರು ಎಂದು ದೂರಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೋರ್ವ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬಂಧಿತರಿಂದ ಎರಡು ಹೊಂಡಾ ಆ್ಯಕ್ಟಿವಾ ಮತ್ತು 850 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News