ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷರಿಗೆ ಅಭಿನಂದನೆ

Update: 2017-06-29 13:30 GMT

ಮಂಗಳೂರು, ಜೂ.29: ರಾಜ್ಯ ಸರಕಾರಿ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷರಾಗಿ ಸತತ 5ನೆ ಬಾರಿಗೆ ಆಯ್ಕೆಯಾದ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಅವರಿಗೆ ಅಭಿನಂದನಾ ಸಮಾರಂಭವನ್ನು ಸಂಘದ ವತಿಯಿಂದ ಸಂಘದ ಸಭಾಭವನದಲ್ಲಿ ಬುಧವಾರ ಏರ್ಪಡಿಸಲಾಗಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕ. ಜಿಲ್ಲಾಧ್ಯಕ್ಷ ಮಂಗಳೂರು ಪ್ರಕಾಶ್ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್ ಉಮೇಶ್, ಮುಖ್ಯ ಯೋಜನಾಧಿಕಾರಿ ಎಂ.ಎನ್.ನಾಯಕ್, ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸುಬ್ರಮಣ್ಯ ಶೇರಿಗಾರ್, ಕುಂದಾಪುರ ತಾ. ಅಧ್ಯಕ್ಷ ದಿನಕರ ಶೆಟ್ಟಿ, ಯುಬಜನ ಮತ್ತು ಕ್ರೀಡಾಧಿಕಾರಿ ಪ್ರದೀಪ್ ಡಿಸೋಜ, ವಾರ್ತಾಧಿಕಾರಿ ಖಾದರ್ ಶಾ, ಕೆ.ಕೃಷ್ಣಯ್ಯ, ಅಲ್ವಿನ್ ಡಿಸೋಜ, ಸತೀಶ್ ಕುಮಾರ್ ಕುದ್ರೋಳಿ, ಸುಬ್ಬರಾವ್ ಮತ್ತಿತರರು ಉಪಸ್ಥಿತರಿದ್ದರು.   

ಇದೇ ಸಂದರ್ಭದಲ್ಲಿ ಫ್ರಾನ್ಸಿಸ್ ಕುಟಿನ್ಹ ದಂಪತಿಯನ್ನು ಸಂಘದ ವತಿಯಿಂದ ಅಭಿನಂದನಾ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ 28 ವರ್ಷ ಸೇವೆ ನೀಡಿ ಸೇವಾ ನಿವೃತ್ತಿ ಹೊಂದಿರುವ ಎ. ಬಾಬು ಕುಮಾರ್, ಗ್ರೂಪ್ ಡಿ ನೌಕರ (ಕರ್ನಾಟಕ ರಾಜ್ಯ ಸರಕಾರಿ ವಿಮಾ ಇಲಾಖೆ, ಮಂಗಳೂರು) ಇವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಚಂದ್ರಹಾಸ ಶೆಟ್ಟಿ, ಎ.ವಸಂತ ನಾಯ್ಕ, ಪಿ.ಕೆ ಕೃಷ್ಣ, ಸಿ.ಎಚ್. ಪುಂಡರೀಕ ಉಪಸ್ಥಿತರಿದ್ದರು. ರಮೇಶ್ ಕಿರೋಡಿಯನ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ವಂದಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News