ದಾಮೋದರ್ ಐತಾಳ್‌ಗೆ ಪತ್ರಿಕಾ ದಿನದ ಗೌರವ

Update: 2017-06-30 14:07 GMT

ಉಡುಪಿ, ಜೂ.30: ಬೆಂಗಳೂರು ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ‘ಹಿರಿಯರೆಡೆಗೆ ನಮ್ಮ ನಡಿಗೆ’ ಪತ್ರಿಕಾ ದಿನದ ಗೌರವವನ್ನು ಹಿರಿಯ ಪತ್ರರ್ಕರ ದಾಮೋದರ್ ಐತಾಳ್ ಅವರಿಗೆ ಶುಕ್ರವಾರ ಅವರ ನಿವಾಸದಲ್ಲಿ ಸಲ್ಲಿಸಲಾಯಿತು.

ದಾಮೋದರ್ ಐತಾಳ್ ಅವರನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ, ಧರ್ಮ ದರ್ಶಿ ಹರಿಕೃಷ್ಣ ಪುನರೂರು ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ನಾದವೈಭವಂ ಉಡುಪಿ ವಾಸುದೇವ ಭಟ್, ವಿಶ್ವ ತುಳುವೆರೆ ಆಯನೋ ಬದಿಯಡ್ಕ ಇದರ ಪ್ರಧಾನ ಸಂಚಾಲಕ ಡಾ.ಕೆ.ರಾಜೇಶ್ ಆಳ್ವ, ಹಿರಿಯ ಕಲಾವಿದ ಪಿ.ಎನ್.ಆಚಾರ್ಯ, ಹಿರಿಯ ಸಾಹಿತಿ ಕು.ಗೋ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ವಹಿಸಿದ್ದರು. ಪತ್ರಕರ್ತ ಸುಭಾಶ್ಚಂದ್ರ ಎಸ್.ವಾಗ್ಳೆ ಅಭಿನಂದನಾ ಭಾಷಣ ಮಾಡಿದರು. ಪತ್ರಿಕೋದ್ಯಮ ಉಪನ್ಯಾಸಕ ಮಂಜಪ್ಪ ದ್ಯಾಗೋಣಿ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News