ಬೈಕ್ ಅಪಘಾತ : ವಿದ್ಯಾರ್ಥಿ ಮೃತ್ಯು
Update: 2017-07-01 22:05 IST
ಮಂಗಳೂರು, ಜು.1: ನಗರದ ಹೊರವಲಯದ ವಳಚ್ಚಿಲ್ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದ ಬೈಕ್ ಅಪಘಾತದಲ್ಲಿ ನೀರುಮಾರ್ಗದ ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ.
ಕೇರಳದ ಕಣ್ಣೂರು ನಿವಾಸಿ ಸೂರಜ್ (20) ಮೃತ ವಿದ್ಯಾರ್ಥಿ. ವಳಚ್ಚಿಲ್ನಲ್ಲಿ ಪಿಜಿಯಲ್ಲಿ ವಾಸವಾಗಿದ್ದ ಇವರು, ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡುಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.