ಗೋಮಾಂಸ ಸಾಗಾಟ ಆರೋಪದಲ್ಲಿ ವ್ಯಾಪಾರಿಯ ಹತ್ಯೆ: ಬಿಜೆಪಿ ನಾಯಕನ ಬಂಧನ
Update: 2017-07-02 04:55 GMT
ಜಾರ್ಖಂಡ್, ಜು.2: ಗೋಮಾಂಸ ಒಯ್ಯುತ್ತಿದ್ದಾರೆ ಎನ್ನುವ ಆರೋಪದಲ್ಲಿ ವ್ಯಾಪಾರೊಯೊಬ್ಬರನ್ನು ಥಳಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಬಿಜೆಪಿ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಕ್ಷದ ಸ್ಥಳೀಯ ಘಟಕದ ನಾಯಕ ಪಪ್ಪು ಬ್ಯಾನರ್ಜಿ ಎಂಬಾತನ ಮನೆಯಿಂದ ನಿತ್ಯಾನಂದ ಮಹ್ತೋ ಹಾಗೂ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರಿನಲ್ಲಿ ತೆರಳುತ್ತಿದ್ದ ಅಸ್ಗರ್ ಅಲಿಯವರನ್ನು ತಡೆದಿದ್ದ ದುಷ್ಕರ್ಮಿಗಳ ಗುಂಪೊಂದು ಅವರನ್ನು ಥಳಿಸಿ ಕೊಲೆಗೈದಿತ್ತು. ಅವರ ಕಾರಿಗೂ ಬೆಂಕಿ ಹಚ್ಚಲಾಗಿತ್ತು.
ಬಂಧಿತ ನಿತ್ಯಾನಂದ ಅಸ್ಗರ್ ಅಲಿಯವರನ್ನು ಕಾರಿನಿಂದ ಹೊರಕ್ಕೆ ಎಳೆದು ತಂದಿದ್ದ. ಈ ಸಂದರ್ಭ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು.