ಚೂರಿಪಳ್ಳ-ಮಾವಿನಕಟ್ಟೆ ರಸ್ತೆ ಉದ್ಘಾಟನೆ

Update: 2017-07-02 11:38 GMT

ಕಾಸರಗೋಡು, ಜು.2: ಜಿಲ್ಲೆಯಲ್ಲಿ ಅಭಿವೃದ್ಧಿಗೊಳಿಸಿದ ಮೂರು ರಸ್ತೆಗಳನ್ನು ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಅವರು ಭಾನುವಾರಂದು ಉದ್ಘಾಟಿಸಿದರು.

ಮಾವಿನಕಟ್ಟೆಯಲ್ಲಿ ಚೂರಿಪಳ್ಳ-ಮಾವಿನಕಟ್ಟೆ ರಸ್ತೆಯನ್ನು ಸಚಿವರು ಉದ್ಘಾಟಿಸಿದರು. ಸಮಾರಂಭದಲ್ಲಿ  ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ. ಕರುಣಾಕರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾಪಂಚಾಯತ್ ಅಧ್ಯಕ್ಷ ಎ. ಜಿ. ಸಿ. ಬಶೀರ್, ಜಿಲ್ಲಾಧಿಕಾರಿ ಜೀವನ್ ಬಾಬು ಕೆ., ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಞಿ ಚಾಯಿಂಟಡಿ, ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯೆ ಮಲ್ಲಿಕಾ ಟೀಚರ್, ಚೆಂಗಳ ಪಂಚಾಯತ್ ಸದಸ್ಯರಾದ ಮಣಿಚಂದ್ರ ಕುಮಾರಿ, ಅಬ್ದುಲ್ಲ ಕುಞಿ ಕುರ್ಳ, ಸಿ. ಸಿಂದು, ವಿವಿಧ ರಾಜಕಿಯ ಪಕ್ಷ ಪ್ರತಿನಿಧಿಗಳಾದ ಕೆ. ಎ. ಮುಹಮ್ಮದ್ ಹನೀಫ, ಅಬ್ದುಲ್ಲ ಕುಞಿ ಚೆರ್ಕಳ, ಪುರುಷೋತ್ತಮನ್ ನಾಯರ್ ಎಂ., ವಿ. ರಾಮನ್, ಸುಧಾಮ ಗೋಸಾಡ, ಎಂ. ಅನಂತನ್ ನಂಬ್ಯಾರ್, ಬಿ. ಎಂ. ಸುಫೈಲ್, ಕರಿವೆಳ್ಳೂರು ವಿಜಯನ್, ಸುರೇಶ್ ಪುದಿಯೇಡತ್ ಶುಭಾಶಂಸನೆಗೈದರು.

ಚೆಂಗಳ ಪಂಚಾಯತ್ ಅಧ್ಯಕ್ಷೆ ಶಾಹಿನ ಸಲೀಂ ಸ್ವಾಗತಿಸಿ, ರೋಡ್ಸ್ ಆ್ಯಂಡ್ ಬ್ರಿಡ್ಜಸ್(ಕೋಝಿಕ್ಕೋಡ್) ಸೂಪರಿಟೆಂಡೆಂಟ್ ಎಂಜಿನಿಯರ್ ಪಿ. ವಿನೀತನ್ ವಂದಿಸಿದರು.

ರೊಡ್ಸ್ ಆ್ಯಂಡ್ ಬ್ರಿಡ್ಜಸ್ ಚೀಫ್ ಎಂಜಿನಿಯರ್ ಎಂ. ಎನ್. ಜೀವರಾಜ್ ವರದಿ ಮಂಡಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News