ಟೆಂಡರ್ ಅವಧಿ ವಿಸ್ತರಣೆ

Update: 2017-07-02 12:19 GMT

ಮಂಗಳೂರು, ಜು.2: 2017-18ನೆ ಸಾಲಿನ ತೋಟಗಾರಿಕೆ ಇಲಾಖೆಯ ಯೋಜನೆಯಡಿ ಎಲ್ಲಾ ತಾಲೂಕುಗಳಲ್ಲಿ ತೋಟಗಾರಿಕೆ ಇಲಾಖೆಯ ತಾಲೂಕು ಹಿರಿಯ ಸಹಾಯಕ / ಸಹಾಯಕ ತೋಟಗಾರಿಕೆ ನಿರ್ದೇಶಕರಿಗೆ ಅರ್ಹ ಗುತ್ತಿಗೆದಾರರ ಮೂಲಕ ಹೊರಗುತ್ತಿಗೆ ಮೇಲೆ ಬಾಡಿಗೆ ವಾಹನ ಒದಗಿಸುವ ಸೇವೆಗೆ ಟೆಂಡರಿನಲ್ಲಿ ಬಿಡ್ ಸಲ್ಲಿಸಲು ನಿಗಧಿಪಡಿಸಿದ್ದ ಅಂತಿಮ ದಿನಾಂಕವನ್ನು ಜು.10 ರ ತನಕ ವಿಸ್ತರಿಸಲಾಗಿದೆ.

ಆಸಕ್ತ ಸಂಸ್ಥೆಯವರು ಜು.10 ರ ಅಪರಾಹ್ನ 4 ಗಂಟೆ ಒಳಗೆ ಕರ್ನಾಟಕ ಸರಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನ ಮೂಲಕ ಟೆಂಡರ್ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ತೋಟಗಾರಿಕೆ ಉಪನಿರ್ದೇಶಕರ ಕಾರ್ಯಾಲಯವನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ತೋಟಗಾರಿಕೆ ಉಪನಿರ್ದೇಶಕರು, ಜಿ.ಪಂ.ದ.ಕ ಜಿಲ್ಲೆ ಮಂಗಳೂರು ಇವರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News