ಗೋರಕ್ಷಣೆ ಪವಿತ್ರ ಕಾರ್ಯವೇ ಹೊರತು ಗೋವಿನ ಹೆಸರಲ್ಲಿ ಕೊಲ್ಲುವುದಲ್ಲ: ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್

Update: 2017-07-04 16:31 GMT

ಗುವಾಹಟಿ, ಜು.4: ಗೋರಕ್ಷಣೆ ಪವಿತ್ರ ಕಾರ್ಯವಾಗಿದೆಯೇ ಹೊರತು, ಗೋರಕ್ಷಣೆಯ ಹೆಸರಿನಲ್ಲಿ ಕೊಲ್ಲುವುದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

“ಗೋವು ಪವಿತ್ರವಾದದ್ದು. ಗೋವಿನ ರಕ್ಷಣೆ ಕೂಡ ಪವಿತ್ರವಾದದ್ದು, ಆದರೆ ಗೋರಕ್ಷಣೆ ಹೆಸರಿನಲ್ಲಿ ಹತ್ಯೆಗೈಯುವುದು ಪವಿತ್ರವಲ್ಲ” ಎಂದವರು ಹೇಳಿದ್ದಾರೆ.
ಭಾರತ-ಬಾಂಗ್ಲಾದೇಶ ಸೌಹಾರ್ದ ಮಾತುಕತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

“ಭಯೋತ್ಪಾದನೆಯೊಂದಿಗೆ ಮೂಲಭೂತವಾದವೂ ಭಾರತ ಹಾಗೂ ಬಾಂಗ್ಲಾದೇಶದ ಪ್ರಮುಖ ಮೌಲ್ಯಗಳಿಗೆ ಬೆದರಿಕೆಯಾಗಿದೆ" ಎಂದವರು ಈ ಸಂದರ್ಭ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News