×
Ad

ವಿದ್ಯಾರ್ಥಿಗಳಿಗೆ ನೇಜಿ ನಾಟಿಯ ಕುರಿತು ಮಾಹಿತಿ ಕಾರ್ಯಕ್ರಮ

Update: 2017-07-05 19:04 IST

ಪುತ್ತೂರು,ಜು.5: ನಗರದ ಸುದಾನ ವಸತಿಯುತ ಶಾಲೆಯ ಮಕ್ಕಳು ಬುಧವಾರ ನಗರದ ಹೊರವಲಯದ ಬೆಳ್ಳಿಪ್ಪಾಡಿ ಗ್ರಾಮದ ಕೈಪ ಎಂಬಲ್ಲಿ ನೇಜಿ ನಾಟಿಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ಗದ್ದೆಗಿಳಿದು ನೇಜಿ ನಾಟಿ ಮಾಡುವ ಮೂಲಕ ಬತ್ತದ ಕೃಷಿಯ ಸ್ವ ಅನುಭವ ಪಡೆದುಕೊಂಡರು. ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೈಪ ಕೇಶವ ಭಂಡಾರಿ ಅವರ ಗದ್ದೆ ಬಳಿಗೆ ತೆರಳಿ ಗದ್ದೆಗೆ ಇಳಿದ ಬಳಿಕ ಅವರಿಗೆ ಬತ್ತ ಬೆಳೆಸುವ ವಿವಿಧ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲಾಯಿತು. ಗದ್ದೆ ಹಿಂದಿನ ಧಾರ್ಮಿಕ ನಂಬಿಕೆಯನ್ನು ಮಕ್ಕಳಿಗೆ ತಿಳಿಸಲಾಯಿತು.

ಈ ಹಿಂದೆ ಗದ್ದೆಯನ್ನು ಎತ್ತುಗಳ ಮೂಲಕ ಉಳುಮೆ ಮಾಡಲಾಗುತ್ತಿದ್ದರೂ ಆಧುನಿಕ ಬದುಕಿಗೆ ಕಾಲಿಟ್ಟ ಇಂದಿನ ಕಾಲಘಟ್ಟದಲ್ಲಿ ಎತ್ತುಗಳು ಕಣ್ಮರೆಯಾಗುತ್ತಿದೆ. ಎತ್ತುಗಳ ಬದಲು ಯಂತ್ರದ ಮೂಲಕ ಗದ್ದೆಯನ್ನು ಹದನು ಮಾಡಲಾಗುತ್ತಿದ್ದು, ಬಳಿಕ ನೇಜಿ ನಾಟಿ ಮಾಡಲಾಗುತ್ತದೆ . ನೇಜಿ ನೆಟ್ಟು ಕೆಲ ದಿನಗಳು ಕಳೆಯುತ್ತಿದ್ದಂತೆ ನೇಜಿ ಬಲಿತು ಬತ್ತದ ಫಸಲು ನೀಡುತ್ತದೆ ಎಂಬ ವಿಚಾರಗಳನ್ನು ಮಕ್ಕಳಿಗೆ ಮನದಟ್ಟು ಮಾಡಲಾಯಿತು.  ಕೈಪ ಮನೆಯವರು ವಿದ್ಯಾರ್ಥಿಗಳಿಗೆ ನೇಜಿ ನಾಟಿ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿದರು. ಕೃಷಿ ಕಾರ್ಯದ ಬಗ್ಗೆ ಸ್ಥಳೀಯ ಕಾರ್ಮಿಕರಾದ ನಾಗು, ಪೂವರು, ಸೀತು, ಬೇಬಿ, ಲಕ್ಷ್ಮಿ ಮತ್ತಿತರರು ನೇಜಿ ನೆಡುವ ಬಗೆಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಹಾಗೂ ‘ಸಂಧಿ’ ಹಾಡು ಕಲಿಸಿದರು

 
ಶಾಲೆಯ ಶಿಕ್ಷಕರು, ಮಠಂತಬೆಟ್ಟು ಮಹಿಷಮರ್ಧಿನಿ ದೇವಾಳಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು,ತಾಲೂಕು ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಬು ಗೌಡ ಭಂಡಾರದಮನೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಲೆ, ಧರ್ಮಸ್ಥಳ ಯೋಜನೆಯ ಸುರೇಶ್, ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ಬನ್ನೂರು ರೈತರ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಪಕ್ಕಳ, ಉಪ್ಪಿನಂಗಡಿ ಕೃಷಿ ಅಧಿಕಾರಿ ಬರ್ಮಣ್ಣನವರ್, ಹಿರಿಯರಾದ ಸೀತಾರಾಮ ಶೆಟ್ಟಿ ಹೆಗ್ಗಡೆಹಿತ್ತಿಲು, ವಾರಿಸೇನ ಜೈನ್ ಕೋಡಿಯಾಡಿ, ಸದಾಶಿವ ಸಾಮಾನಿ ಸಂಪಿಗೆದಡಿ, ಚಂದನ್ ಗೌಡ ತೆಂಕಪ್ಪಾಡಿ, ಯೊಗೀಶ್ ಸಾಮಾನಿ ಸಂಪಿಗೆದಡಿ ಮತ್ತಿತರರು ಈ ಸಂದರ್ಭದಲ್ಲಿಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News