ಕುತ್ತಾರು: ಯುವಕನ ಮೇಲೆ ತಲವಾರಿನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

Update: 2017-07-08 16:43 GMT

ಉಳ್ಳಾಲ, ಜು.8: ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ರಾಣಿಪುರದಲ್ಲಿ ನಡೆದಿದೆ. 

ಅಂಬ್ಲಮೊಗರು ಗ್ರಾಮದ ಕ್ವಾಟ್ರಗುತ್ತು ನಿವಾಸಿ ಚಿರಂಜೀವಿ (25) ತಲವಾರು ದಾಳಿಗೊಳಗಾದ ಯುವಕ. ಚಿರಂಜೀವಿ ಶನಿವಾರ ಸಂಜೆ ಕುತ್ತಾರಿನಿಂದ ಕ್ವಾಟ್ರಗುತ್ತುವಿನ ಮನೆ ಕಡೆ ತೆರಳುತ್ತಿದ್ದ ವೇಳೆ ಕಪ್ಪು ಪಲ್ಸರ್ ಬೈಕ್ ನಲ್ಲಿ ಹಿಂಬಾಲಿಸಿ ಬಂದ ಮೂವರು ಚಿರಂಜೀವಿ ತಲೆಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.

ತಲವಾರು ದಾಳಿಗೊಳಗಾದ ಚಿರಂಜೀವಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News